hits counter
  Create Free Blog | Random Blog »   Report Abuse | Login   

 

Aug 16 2009

ಆಧುನಿಕ ಯುಗದ ಹೊಸ ತರಹದ ಭಿಕ್ಷಾಟನೆ

Published by gurumlr under Save India

“ಸರ್ ನಮ್ಮ ಬಡಾವಣೆಯಲ್ಲಿ ಈ ಸಾರಿ ಗಣೇಶ ಕೂರಿಸುತ್ತಿದ್ದೇವೆ. ದಯವಿಟ್ಟು ಹಣ ಸಹಾಯ ಮಾಡಿ ಸಾರ್”
“ರೀ…ಕಳೆದ ಸಾರಿ ಕೇಳಿದಾಗ ಮುಂದಿನ ಸಲ ಕೊಡ್ತೀನಿ ಅಂದ್ರಲ್ಲಾ…ಈಗ ಬಂದಿದ್ದೀವಿ…ಚಂದಾ ಕೊಡಿ”
ಈ ಥರಾ ಹೊಸ ಶೈಲಿಯ ಡೈಲಾಗ್‍ಗಳನ್ನು ನೀವು ಈಗಾಗಲೇ ಕೇಳಲು ಶುರುಮಾಡಿರಬಹುದು. ಅದೇರೀ…..ಗೌರಿ ಗಣೇಶ ಹಬ್ಬ ಬರುತ್ತಿದೆಯಲ್ಲಾ. ಇದನ್ನೇ ಬಂಡವಾಳ ಮಾಡಿಕೊಂಡು ಕೆಲ ಅಪಾಪೋಲಿಗಳು, ಪುಡಿರೌಡಿಗಳು, ಪೋಕರಿಗಳು ಈಗಾಗಲೇ ಚಂದಾ ವಸೂಲಿಗೆ ಶುರು ಮಾಡಿದ್ದಾರೆ. ಮನೆ ಮನೆಗೆ ಭೇಟಿ ನೀಡುವ ಈ ನೀಚರು ಬಲವಂತವಾಗಿ, ಜೋರು ಮಾಡಿ, ಹೆದರಿಸಿ ಹಣ ಸುಲಿಗೆ ಮಾಡುತ್ತಿದ್ದಾರೆ. ಗಣೇಶನ ಹೆಸರಿನಲ್ಲಿ ಹಣ ವಸೂಲಿ ಮಾಡಿ, ಗಣೇಶನನ್ನು ನೀರಿಗೆ ಹಾಕಿದ ಮೇಲೆ, ಅನೇಕ ಮಂದಿ ಕುಡಿದು, ಅಮಲೇರಿ ಚರಂಡಿಯಲ್ಲಿ ಬಿದ್ದು ಹೊರಳಾಡಿ, ಅದರಲ್ಲೇ ಸಾರ್ಥಕತೆಯನ್ನು ಪಡೆಯುತ್ತಾರೆ. ತಮ್ಮ ಜೀವನ ಈ ಒಂದು ವರ್ಷದ ಮಟ್ಟಿಗೆ ಸಾರ್ಥಕವಾಯಿತು ಎಂದು ಭಾವಿಸಿ, ಮರುದಿನ ಏನೂ ನಡೆದೇ ಇಲ್ಲವೆಂಬಂತೆ ಮಾಮೂಲಿಯಾಗಿದ್ದುಬಿಡುತ್ತಾರೆ.

ಎಲ್ಲರೂ ಈ ಥರಾ ಮಾಡುತ್ತಾರೆಂದಲ್ಲ. ಇದರಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಚಂದಾ ವಸೂಲು ಮಾಡಿದರೂ ಒಳ್ಳೆ ಕೆಲಸ ಕಾರ್ಯ ಹಮ್ಮಿಕೊಳ್ಳುತ್ತಾರೆ. ಶ್ರೀ. ಬಾಲಗಂಗಾಧರ ತಿಲಕರು ಈಗ ಬದುಕಿದ್ದಿದ್ದರೆ ಖಂಡಿತಾ ಈ ಜನ ಜನರ ಒಗ್ಗಟ್ಟಿಗೆ ಹುಟ್ಟು ಹಾಕಿದ ಈ ಗಣೇಶೋತ್ಸವವನ್ನು ನಿಷೇಧ ಮಾಡಿ ಎಂದು ಸರಕಾರವನ್ನು ಕೋರಿಕೊಳ್ಳುತ್ತಿದ್ದರೋ ಏನೋ.

ಬಡ ಮಕ್ಕಳಿಗೆ ಸಹಾಯ, ಬಡಾವಣೆಯಲ್ಲಿ ಹೊಸ ಶಾಲೆ ಪ್ರಾರಂಭ, ಅನಾಥಾಲಯಗಳಿಗೆ ಸಹಾಯ, ಹೊಸ ಆಸ್ಪತ್ರೆಗಳ ಪ್ರಾರಂಭಕ್ಕೆ ಸಹಾಯ….ಮುಂತಾದ ಒಳ್ಳೆಯ ಕಾರ್ಯಕ್ರಮಗಳನ್ನು ಈ ಸಂಘಟನೆಗಳು ಹಮ್ಮಿಕೊಂಡಲ್ಲಿ, ಈ ಸಾರ್ವಜನಿಕ ಗಣೇಶೋತ್ಸವಕ್ಕೆ ಒಂದು ಹೊಸ ಅರ್ಥ ಬರುತ್ತದೆ.

 ಎಲ್ಲ ಸಂಘಟನೆಗಳಲ್ಲಿ ಮನವಿ ಎಂದರೆ…”ದಯವಿಟ್ಟು ಈ ಸಾರ್ವಜನಿಕ ಗಣೇಶೋತ್ಸವವನ್ನು ಒಳ್ಳೆಯ ಕಾರ್ಯಗಳಿಗೆ ಸಹಾಯವಾಗುವ ಹಾಗೆ ಮಾಡಿ. ಅನ್ಯಧರ್ಮೀಯರು ಕೇವಲವಾಗಿ ಮಾತಾಡುವ ಹಾಗೆ ಮಾಡಬೇಡಿ.”
“ನಿಮ್ಮ ಕೈಯಲ್ಲಿ ಸಾಧ್ಯವಾದರೆ ನೀವೇ ಮಾಡಿ, ಅದಕ್ಕೆ ಬಲವಂತದ ಚಂದಾ ವಸೂಲಿ ಮಾಡಿ, ದ್ವೇಷದ ವಾತಾವರಣ ಸೃಷ್ಟಿಯಾಗುವ ಹಾಗೆ ದಯವಿಟ್ಟು ಮಾಡಬೇಡಿ.”

“ಶ್ರೀ. ಬಾಲಗಂಗಾಧರ ತಿಲಕರ ಕನಸು ನನಸು ಮಾಡಿ”

Share SocialTwist Tell-a-Friend 

No responses yet

Apr 30 2009

ಧಿಕ್ಕಾರವಿರಲಿ ಮತದಾನ ಮಾಡದವರಿಗೆ

Published by gurumlr under Save India

<strong>ಬೆಂಗಳೂರು ಏಪ್ರಿಲ್ ೩೦:</strong> ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ನಮ್ಮ ದೇಶದ ಪ್ರತಿಶತ ೫೦ ರಷ್ಟು ಮತದಾರರು ತಮ್ಮ ಮತ ಚಲಾಯಿಸದೆ ತಮಗೆ ಈ ದೇಶದ ಬಗ್ಗೆ ಇರುವ ಗೌರವವನ್ನು ವಿಶ್ವಕ್ಕೇ ತೋರಿಸಿದ್ದಾರೆ. ಇಂತಹ ಬುದ್ದಿಹೀನ ಮತದಾರರಿಂದಾಗಿಯೇ ನಾವು ಪ್ರತೀಬಾರಿ ಅದಕ್ಷ, ಅನರ್ಹ ಸರಕಾರವನ್ನು ಪಡೆಯುತ್ತಿದ್ದೇವೆ.

ಅಲ್ಲ, ಈ ಜನಗಳಿಗೆ ಸರಕಾರವನ್ನು, ರಾಜಕಾರಣಿಗಳನ್ನು ಟೀಕಿಸುವುದಕ್ಕೆ ಸಮಯ ಬೇಕಾದಷ್ಟಿದೆ. ಅಲ್ಲದೇ ಅದು ತಮ್ಮ ಜನ್ಮ ಸಿದ್ದ ಹಕ್ಕು ಎಂದುಕೊಂಡು ರಾಜಕಾರಣಿಗಳನ್ನು, ಸರಕಾರಗಳನ್ನು ಬಾಯಿಗೆ ಬಂದಂತೆ ಬಯ್ಯುತ್ತಾ ಕಾಲಕಳೆಯುತ್ತಿದ್ದರೂ, ಇಂತಹ ಸರಕಾರಗಳ ಹುಟ್ಟಿಗೆ ತಾವೇ ಪರೋಕ್ಷ ಕಾರಣವೆಂಬ ತಿಳಿವಳಿಕೆ ಇಲ್ಲದಿರುವುದು ಈ ಜನರ ಮುಠ್ಠಾಳತನವನ್ನು ತೋರಿಸುತ್ತದೆ.

ಮತದಾನವೆಂಬುದು ತಮ್ಮ ಹಕ್ಕು. ಒಂದು ಉತ್ತಮ ಸರಕಾರದ ಜನನಕ್ಕೆ ಕಾರಣವಾಗುತ್ತದೆ, ಉತ್ತಮ ರಾಜಕಾರಣಿಗಳ ಆಯ್ಕೆಗೆ ಸಹಕಾರಿಯಾಗುತ್ತದೆ ಎಂಬ ಕನಿಷ್ಟ ಪರಿಜ್ಞಾನವೂ ಅವರಿಗೆ ಇಲ್ಲದಿರುವುದು ಒಂದು ರಾಷ್ಟ್ರೀಯ ದುರಂತವೆನ್ನಬಹುದು. ಬಹುತೇಕ ವಿದ್ಯಾವಂತರೇ ಈ ಗುಂಪಿಗೆ ಸೇರಿರುವುದು ನಾಚಿಕೆಗೇಡು.

“ಈ ಜನರಿಗೆ ಯಾವತ್ತೂ ಬುದ್ದಿ ಬರುವುದಿಲ್ಲ….”….ಅಲ್ಲರೀ ವೋಟು ಯಾರಿಗೆ ಬೇಕಾದರೂ ಹಾಕಿ…. ಅದರೆ ಮತದಾನ ಮಾತ್ರ ಮಾಡದಿರಬೇಡಿ. ನೀವು ಮತದಾನ ಮಾಡದಿರುವುದರಿಂದ ಅಯೋಗ್ಯ ಸರಕಾರಗಳು ಅಧಿಕಾರ ಹಿಡಿಯುತ್ತವೆ. ಅಯೋಗ್ಯ ರಾಜಕಾರಣಿಗಳು ಆಯ್ಕೆ ಆಗುತ್ತಾರೆ. ಅಯೋಗ್ಯ ಪಕ್ಷಗಳು ಚಿಗುರಿಕೊಳ್ಳುತ್ತವೆ. ಅದೂ ಅಲ್ಲದೆ ಸಿಲಿಕಾನ್ ಕಣಿವೆ ಎಂದು ಹೆಸರಾದ ಉದ್ಯಾನನಗರಿಯಲ್ಲಿಯೇ ಕನಿಷ್ಥ ಮತದಾನವಾಗಿರುವುದು ಬಹಳ ಚಿಂತೆಯ ವಿಷಯ. ಧಿಕ್ಕಾರವಿರಲಿ ಈ ವಿದ್ಯಾವಂತ ಬುದ್ದಿಹೀನರಿಗೆ .

Share SocialTwist Tell-a-Friend 

No responses yet

Apr 18 2009

ನನ್ನ ಮತ ಮಾರಾಟಕ್ಕೆ ಇದೆ…!!!!

Published by gurumlr under Uncategorized

<strong>ಬೆಂಗಳೂರು ಎಪ್ರಿಲ್ ೧೮:</strong> ಮತದಾನದ ದಿನ ಹತ್ತಿರ ಬರುತ್ತಿದ್ದಂತೆ ಎಲ್ಲರಿಗೂ ಎನೋ ಒಂಥರಾ ಮಜಾ. ಕೆಲ ಜನರಿಗೆ ಹೆಂಡ, ಸಾರಾಯಿ, ಹಣ ಮುಂತಾದವುಗಳನ್ನು ತೆಗೆದುಕೊಂಡು ಖುಷಿ ಪಡುವ ದಿನ. ಪ್ರತೀ ವರ್ಷ ಈ ಥರಾ ಚುನಾವಣೆಗಳು ಬರಬಾರದೇ ಎಂಬ ಆಸೆ. ಅದೇ ಥರಾ ನನಗೂ ಒಂದು ಆಸೆ ಇದೆ ಮರಾಯ್ರೆ!!!!

ಅಂದರೆ ನನ್ನ ಅಮೂಲ್ಯವಾದ ಮತವನ್ನು ಮಾರಿಕೊಳ್ಳುವುದು. ಇವರಿಗೆ ಮತ ಹಾಕಿ ಐದು ವರ್ಷದಲ್ಲಿ ಕಿತ್ತು ಗಡ್ಡೆ ಹಾಕಿರುವುದು ಅಷ್ಟರಲ್ಲೇ ಇದೆ. ಸ್ವಲ್ಪ ದುಡ್ಡಾದರೂ ಅವರಿಂದ ಕಿತ್ತುಕೊಂಡರೆ ಹಾಕಿದ ಮತಕ್ಕಾದರೂ ಕವಡೆ ಕಿಮ್ಮತ್ತಿನ ಬೆಲೆ ಬರಬಹುದೇನೋ ಎಂಬ ಆಸೆ. ಅಂದರೆ ನನ್ನ ಕಂಡೀಷನ್ನು ಏನು ಇಲ್ಲ. ಯಾರು ಎಷ್ಟು ಹೆಚ್ಚು ಹಣ ಕೊಡುತ್ತಾರೋ ಅವರಿಗೇ ನನ್ನ ಮತ. ಏಕೆಂದರೆ ಇದುವರೆಗೆ ಆಳಿ ಹೋದ ಅಳಿದು ಹೋದ ಜನನಾಯಕರಿಂದ ನನಗಂತೂ ಪುಟಗೋಸಿಯ ಉಪಕಾರ ಆಗಿಲ್ಲ. ಉಪಕಾರಕ್ಕಿಂತ ಉಪದ್ರವೇ ಹೆಚ್ಚು ಎನ್ನಬಹುದು. ಈಗ ಕರ್ನಾಟಕದಲ್ಲಿರುವ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಒಬ್ಬನೇ ಒಬ್ಬ ಅಭ್ಯರ್ಥಿ ಕರ್ನಾಟಕದ ಜನರ ಕೂಗಿಗೆ ಸ್ಪಂದಿಸಬಲ್ಲಂತಹ ಅರ್ಹತೆ ಹೊಂದಿಲ್ಲ. ಕೇವಲ ದುಡ್ಡು ಮಾಡಿಕೊಳ್ಳುವುದು ಹೇಗೆ, ಜನರ ತಲೆ ಹೊಡೆಯುವುದು ಹೇಗೆ ಎಂಬ ಚಿಂತೆಯಲ್ಲೇ ಮುಳುಗಿರುವ ಈ ನಾಲಯಕ್ ಮಂದಿಗೆ ಓಟು ಕೊಟ್ಟರೆಷ್ಟು ಬಿಟ್ಟರೆಷ್ಟು?. ಆದ್ದರಿಂದ ನಾನು ನನ್ನ ಮತವನ್ನು ಬಹಿರಂಗವಾಗಿ ಹರಾಜಿಗೆ ಇಟ್ಟಿದ್ದೇನೆ. ಯಾರಾದರೂ ಹೆಚ್ಚಿನ ಹಣ ಕೊಟ್ಟಲ್ಲಿ, ಅವ ಎಂಥಹಾ ಕ್ರಿಮಿನಲ್ ಆಗಿರಲಿ, ಕೊಲೆಗಾರ ಆಗಿರಲಿ, ರೇಪಿಸ್ಟ್ ಆಗಿರಲಿ ಅವನಿಗೇ ನನ್ನ ಮತ. ಏಕೆಂದರೆ ಒಮ್ಮೆ ಮತ ಕೊಟ್ಟಮೇಲೆ ಅವ ಮತ್ತೆ ಮುಖ ತೋರಿಸುವುದು ಮುಂದಿನ ಚುನಾವಣೆಯಲ್ಲಿ ಮಾತ್ರ. ಅಲ್ಲದೆ ಕ್ಷೇತ್ರದ ಸಮಸ್ಯೆ, ಜನರ ಸಮಸ್ಯೆ, ರಾಜ್ಯದ ಸಮಸ್ಯೆ ಇವರಿಗೆ ಕಿತ್ತು ಹೋದ ಚಪ್ಪಲಿಗೆ ಸಮ.

ಈ ಮೂಲಕ ನಾನು ಎಲ್ಲ ರಾಜಕೀಯ ಪಕ್ಷಗಳಿಗೆ ಮುಕ್ತವಾದ ಒಂದು ಆಹ್ವಾನ ನೀಡುತ್ತಿದ್ದೇನೆ. ಈ ಬಹಿರಂಗ ಹರಾಜಿನಲ್ಲಿ ಯಾರು ಅತೀ ಹೆಚ್ಚಿನ ಮೊತ್ತ ದಾಖಲಿಸುತ್ತಾರೋ ಅವರಿಗೇ ನನ್ನ ಮತ. ಕೂಡಲೇ ಇದರಲ್ಲಿ ಭಾಗವಹಿಸುವ ರಾಜಕೀಯ ಪಕ್ಷಗಳು ಕೂಡಲೇ ನನ್ನನ್ನು ಸಂಪರ್ಕಿಸಬೇಕಾಗಿ ವಿನಂತಿ. ಹರಾಜು ಪ್ರಾರಂಭವಾಗುವ ಮೊತ್ತ ರೂ.೫೦೦೦/-. ಇದಕ್ಕಿಂತ ಜಾಸ್ತಿ ಕೂಗಿ ನಿಮ್ಮ ಪಕ್ಷಕ್ಕೆ ನನ್ನ ಮತ ಬೀಳುವ ಹಾಗೆ ನೋಡಿಕೊಳ್ಳಿ.

<strong>ಎಚ್ಚರಿಕೆ:ನನ್ನ ಒಂದು ಮತ ನಿಮ್ಮ ಭವಿಷ್ಯ ನಿರ್ಧರಿಸಬಹುದು.</strong>

Share SocialTwist Tell-a-Friend 

No responses yet

Apr 05 2009

ಕನ್ನಡಿಗರಿಗೇ ಮತ ನೀಡಿ

Published by gurumlr under Save Karnataka

ಸದ್ಯದಲ್ಲೇ ಚುನಾವಣೆಗೆ ಮತದಾರ ಸಜ್ಜಾಗಬೇಕಿದೆ. ಈ ನಿಟ್ಟಿನಲ್ಲಿ ಕರ್ನಾಟಕದ ಮತದಾರ ಜಾಗೃತನಾಗಬೇಕಿದೆ. ಈ ಬಾರಿ ಕನ್ನಡಿಗ ತನ್ನ ಒಂದು ಮತದ ಬೆಲೆ ಏನು ಎನ್ನುವುದನ್ನು ಎಲ್ಲಾ ರಾಜಕೀಯ ಪಕ್ಷಗಳಿಗೆ ತೋರಿಸಬೇಕಾಗಿದೆ.

ಅಂದರೆ ಪ್ರತೀ ಕನ್ನಡಿಗ ತನ್ನ ಮತ ಕ್ಷೇತ್ರದ ಪ್ರತಿ ಅಭ್ಯರ್ಥಿಯ ಹಿನ್ನೆಲೆ ವಿಚಾರಿಸಿ ಮತ ನೀಡಬೇಕಾಗಿದೆ. ಅಂದರೆ ಅಭ್ಯರ್ಥಿ ಕರ್ನಾಟಕದ ಪರವಾಗಿದ್ದಾನೆಯೋ? ಅಥವಾ ಇತರ ಭಾಷಾಪರವಾಗಿದ್ದನೆಯೋ ಎಂಬುದನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಮತ ನೀಡಬೇಕಾದ ಪರಿಸ್ಥಿತಿ ಬಂದಿದೆ.
ದಯವಿಟ್ಟು ಈ ಕೆಳಗಿನ ಅಂಶಗಳನ್ನು ಗಮನಿಸಿ ನೀವು ಮತದಾನ ಮಾಡಿ :
೧. ಅಭ್ಯರ್ಥಿಯು ಕನ್ನಡಿಗನಾಗಿರಬೇಕು.
೨. ಕರ್ನಾಟಕ ಹಾಗೂ ಕನ್ನಡಕ್ಕೆ ಗೌರವ ಕೊಡುವವನಾಗಿರಬೇಕು.
೩. ಕನ್ನಡ ಓದಲು ಬರೆಯಲು ಬರುವವನಾಗಿರಬೇಕು.
೪. ಕನಿಷ್ಠ ಪದವಿ ಓದಿರಬೇಕು.
೫. ಮತದಾರರನ್ನು ಓಲೈಸಲು ಅವರ ಕಾಲು ಬೇಕಾದರೂ ನೆಕ್ಕಲೂ ತಯಾರಿರುವ ಅಭ್ಯರ್ಥಿಗಳನ್ನು ಸೋಲಿಸಿ, ಅವರಿಗೆ ಮತ ನೀಡಬೇಡಿ.
೬. ಅರವತ್ತಕ್ಕಿಂತ ಹೆಚ್ಚಿನ ವಯಸ್ಸಿನ ಅಭ್ಯರ್ಥಿಗಳಿಗೆ ದಯವಿಟ್ಟು ಮತ ನೀಡಬೇಡಿ.
೭. ಹಣ, ಹೆಂಡ ಹಂಚುವ ಅಭ್ಯರ್ಥಿಗಳನ್ನು ಸೋಲಿಸಿ. (ಹಣ, ಹೆಂಡ ಬೇಕಾದರೆ ತೆಗೆದುಕೊಳ್ಳಿ, ಆದರೆ ಮತ ಮಾತ್ರ ನೀಡಲೇ ಬೇಡಿ.)
೮. ಅಭ್ಯರ್ಥಿಯ ಹಿನ್ನೆಲೆ ವಿಚಾರಿಸಿ (ಅಂದರೆ ಅವನ ವ್ಯಾಪಾರ ವಹಿವಾಟು, ಕ್ರಿಮಿನಲ್ ಹಿನ್ನೆಲೆ) ಮತ ನೀಡಿ.
೯. ಬೆಳಗಾವಿಯ ಸುರೇಶ್ ಅಂಗಡಿ, ಸಂಜಯ್ ಪಾಟೀಲ್ ಹಾಗೂ ರಮೇಶ ಕತ್ತಿ ಯಂತಹ ಕನ್ನಡ ದ್ರೋಹಿಗಳಿಗೆ ದಯವಿಟ್ಟು ಮತ ನೀಡಬೇಡಿ. (ಏಕೆಂದರೆ ಇವರು ಮತಕ್ಕಾಗಿ ಮರಾಠಿಗರ ಕಾಲು ನೆಕ್ಕಲೂ ಹಿಂಜರಿಯದವರು).
೧೦. ಕರ್ನಾಟಕದ ಗಣಿ ಲೂಟಿ ಮಾಡಿ ಮೆರೆಯುತ್ತಿರುವ ಬಳ್ಳಾರಿಯ ಖದೀಮರಿಗೆ (ಅವರು ಯಾವ ಪಕ್ಷವಾದರೂ ಸರಿ) ಮತ ನೀಡಬೇಡಿ.
೧೧. ಕುಟುಂಬ ರಾಜಕಾರಣ ಮಾಡುತ್ತಿರುವ ಅಭ್ಯರ್ಥಿಗಳಿಗೆ ಮತ ನೀಡಬೇಡಿ.
೧೨. ಕಳೆದ ಬಾರಿ ಸಂಸತ್ತಿಗೆ ಆಯ್ಕೆಯಾದ ನಾಲಾಯಕ್ ಸಂಸದರಿಗೆ ದಯವಿಟ್ಟು ಮತ ನೀಡಬೇಡಿ…ಏಕೆಂದರೆ ಅವರೆಲ್ಲಾ ಕನ್ನಡ ವಿರೋಧಿಗಳೇ ಸರಿ. ಅವರು ಯಾವತ್ತೂ ಕರ್ನಾಟಕದ ಪರ, ಕನ್ನಡದ ಪರ ದನಿ ಎತ್ತಲೇ ಇಲ್ಲ.

ಇನ್ನೂ ಏನಾದರೂ ಬಿಟ್ಟು ಹೋಗಿದ್ದರೆ ದಯವಿಟ್ಟು ತಿಳಿಸಿ.

ಕರ್ನಾಟಕ ಕೇವಲ ಕನ್ನಡಿಗರಿಗೆ. ಹೊರಗಿನಿಂದ ಬಂದು ಇಲ್ಲಿನ ಸಂಸ್ಕೃತಿ, ನೆಲವನ್ನು ಹಾಳುಗೆಡವುವ ಖದೀಮರನ್ನು ರಾಜ್ಯ ಬಿಟ್ಟು ಓಡಿಸಿ. ಕರ್ನಾಟಕ ಕೇವಲ ಕನ್ನಡಿಗರಿಗೆ.

Share SocialTwist Tell-a-Friend 

No responses yet

Mar 25 2009

ಕರ್ನಾಟಕದ ದುರಾದೃಷ್ಟ…ಎಲ್ಲರೂ ಕೀಚಕರೇ…

Published by gurumlr under Uncategorized

ಬೆಂಗಳೂರು ಮಾರ್ಚ್ ೨೨: ಇತ್ತೀಚೆಗೆ ಬೆಳಗಾವಿಯಲ್ಲಿ ಕನ್ನಡ ಸಂಸದ ಸುರೇಶ್ ಅಂಗಡಿ ಹಾಗೂ ಶಾಸಕ ಸಂಜಯ ಪಾಟೀಲ್ ಎಂಬವರು ಕನ್ನಡದ್ರೋಹದ ಕೆಲಸವನ್ನು ಮಾಡಿರುವುದು ಕಳವಳಕಾರಿ ಘಟನೆಯಾಗಿದೆ. ಇದನ್ನು ಸಮರ್ಥಿಸಿಕೊಂಡ ಮಾನ್ಯ ಮುಖ್ಯಮಂತ್ರಿಗಳ ವೈಖರಿ ನೋಡಿದರೆ ಬಿ.ಜೆ.ಪಿ.ಯ ಕರ್ನಾಟಕ ದ್ರೋಹ ನಿಧಾನವಾಗಿ ಬಯಲಾಗುತ್ತಿದೆ.

ಕರ್ನಾಟಕದಲ್ಲಿ ಸದಾ ಅಧಿಕಾರ ಸವಿ ಸವಿದು ಖಜಾನೆ ಲೂಟಿ ಹೊಡೆದು ಚಿಕ್ಕಾಸಿನ ಕೆಲಸ ಮಾಡದ ಕಾಂಗ್ರೆಸ್ ಎಂಬ ರಾಷ್ಟ್ರೀಯ ಪಕ್ಷಕ್ಕೆ ಸಡ್ಡು ಹೊಡೆಯುವ ಮತ್ತೊಂದು ಪಕ್ಷ ಇಲ್ಲದಿದ್ದುದು ನಮ್ಮ ಕನ್ನಡಿಗರಿಗೆ ಒಂದು ನಿರಾಸೆಯ ವಿಷಯವಾಗಿತ್ತು. ಆದರೆ ಭಾರತೀಯ ಜನತಾ ಪಾರ್ಟಿ ಮರೀಚಿಕೆಯಂತೆ ಮೈಕೊಡವಿ ಎದ್ದು ಬಂದು ರಾಜ್ಯದ ಗದ್ದುಗೆ ಹಿಡಿದಾಗ ಎಲ್ಲರಿಗಿಂತ ಸಂತಸ ಪಟ್ಟವ ನಾನು. ಸದ್ಯ ಈಗಲಾದರೂ ಕರ್ನಾಟಕದ, ಕನ್ನಡದ ಅಭಿವೃದ್ದಿ ಖಂಡಿತಾ ಸಾಧ್ಯವಾಗುತ್ತದೆ ಎಂಬ ನನ್ನ ಕನಸು ಇತ್ತೀಚೆಗೆ ಸುಳ್ಳಾಗತೊಡಗಿದೆ. ಏಕೆಂದರೆ ಇತ್ತೀಚೆಗೆ ಬಿ.ಜೆ.ಪಿ. ಮಂದಿ ರಾಷ್ಟ್ರೀಯ ದೃಷ್ಟಿಕೋನದ ನೆಪದಲ್ಲಿ ಕರ್ನಾಟಕ ಹಾಗೂ ಕನ್ನಡವನ್ನು ಮರೆತು ಈ ರಾಜ್ಯಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿರುವುದು ಕಳವಳಕಾರಿಯಾಗಿದೆ.

ಬಳ್ಳಾರಿಯಲ್ಲಿ ಆಂಧ್ರದ ಪ್ರಖ್ಯಾತ ಖದೀಮರಾದ ರೆಡ್ಡಿ ಸಹೋದರರು ಗಣಿ ಲೂಟಿ ಮಾಡಿ, ಕನ್ನಡದ ನೆಲವನ್ನು ಆಂಧ್ರಕ್ಕೆ ಮಾರುವಷ್ಟರ ಮಟ್ಟಿಗೆ ಬೆಳೆದಿರುವುದು ಹಾಗೂ ಜನರ ಹಿತಕ್ಕೆ ವಿರುದ್ಧವಾದ ಕೆಲಸ ( ಇಂಜಿನಿಯರಿಂಗ್ ಕಾಲೇಜನ್ನು ಸ್ಥಳಾಂತರ ಮಾಡಿದ್ದು ಮೊದಲಾದ) ಮಾಡುತ್ತಿರುವುದು ಇದರಲ್ಲಿ ಪ್ರಮುಖವಾಗಿದೆ. ಹಾಗೂ ಬೆಳಗಾವಿಯಲ್ಲಿ ಕೇವಲ ಪುಟಗೋಸಿ ಮರಾಠಿ ವೋಟಿಗಾಗಿ ಅವರ ಕಾಲು ನೆಕ್ಕಿ ಬೆಳಗಾವಿ ನಗರಪಾಲಿಕೆಯಲ್ಲಿ ಮರಾಠಿ ಧ್ವಜ ಹಾರುವಂತೆ ಮಾಡಿದ ಬಿ.ಜೆ.ಪಿ. ಸಂಸದ, ಕನ್ನಡ ದ್ರೋಹಿ, ಕರ್ನಾಟಕ ದ್ರೋಹಿ ಸುರೇಶ್ ಅಂಗಡಿ ಹಾಗೂ ಸಂಜಯ ಪಾಟೀಲ್ ಎಂಬ ದುಷ್ಟರಿಗೆ ಮುಖ್ಯಮಂತ್ರಿಗಳೇ ಬೆಂಬಲದ ಮಾತಾಡಿದರೆ ವೀರ ಕನ್ನಡಿಗರ ರಕ್ತ ಕುದಿಯದಿರುತ್ತದೆಯೇ?.

ರಾಷ್ಟ್ರೀಯವಾಗಿ ಚಿಂತನೆ ಮಾಡಬೇಕೆಂಬ ಕೆಲವರ ವಾದ ನಿಜವಾಗಿರಬಹುದು, ಆದರೆ ಇಂದು ಎನ್.ಸಿ.ಪಿ ಹಾಗೂ ಶಿವಸೇನೆ ಮಾಡುತ್ತಿರುವುದು ಏನು?. ಕೇವಲ ಪ್ರಾದೇಶಿಕ ಚಿಂತನೆಯ ಮಟ್ಟಕ್ಕೆ ಈ ಪಕ್ಷಗಳು ಇಳಿದಿರುವುದು ಅವುಗಳ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ, ಹಾಗೂ ಅವುಗಳ ಜನಪ್ರಿಯತೆ ಕುಸಿದಿರುವುದಕ್ಕೆ ಸಾಕ್ಷಿಯಾಗಿದೆ. ಈಗ ಕರ್ನಾಟಕದ ಬಿ.ಜೆ.ಪಿ.ಯೂ ಅದೇ ಹಾದಿಯನ್ನು ಹಿಡಿದಿರುವುದು, ಓಟು ಕೊಟ್ಟು ಗೆಲ್ಲಿಸಿದ ಕನ್ನಡಿಗರಿಗೆ ಮಾಡುತ್ತಿರುವ ದ್ರೋಹವಲ್ಲದೆ ಮತ್ತೇನು?. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ……ಈಗ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕಾಗಿದೆ. ಈ ಬಿ.ಜೆ.ಪಿ. ಮಂದಿ ಕನ್ನಡಿಗರಿಗೆ ಅನ್ಯಾಯ ಮಾಡುವುದಿಲ್ಲ ಎಂಬುದು ಯಾವ ಖಾತರಿ?. ಈ ಮುಖ್ಯಮಂತ್ರಿಯಂತೂ ತನ್ನ ಕ್ಷೇತ್ರದಲ್ಲಿ ಹಣದ ಹೊಳೆಯನ್ನೇ ಸುರಿಯುತ್ತಿರುವುದು, ತನ್ನ ಬುಡ ಗಟ್ಟಿ ಮಾಡಿಕೊಳ್ಳುವ ತಂತ್ರವಲ್ಲದೇ ಮತ್ತೇನು?.

ಇತ್ತೀಚೆಗೆ ಬಿ.ಜೆ.ಪಿ ಮಂದಿ ಪದ್ಮನಾಭನಗರ ಕ್ಷೇತ್ರದಲ್ಲಿ “ಜನಪದ ಜಾತ್ರೆ” ನಡೆಸಿದ್ದರು. ಅಲ್ಲಿ ಎಲ್ಲ ಬಿ.ಜೆ.ಪಿ. ಮಂದಿ ತಾವು ಮಾತ್ರ ರಾಷ್ಟ್ರ ಭಕ್ತರೆಂದು ತೋರಿಸಿಕೊಳ್ಳುತ್ತಾ, ಮೊದಲು ದೇಶ..ಆಮೇಲೆ ಕರ್ನಾಟಕ ಎಂಬ “ತಿಕ್ಕಲು” ಮಾತು ಆಡಿದರು. ಮೊದಲು ರಾಜ್ಯ, ಆಮೇಲೆ ದೇಶ ಎಂಬ ಕನಿಷ್ಠ ಪರಿಜ್ಞಾನವೂ ಇಲ್ಲದ ಈ ಮಂದಿಯಿಂದ ಕನ್ನಡದ, ಕರ್ನಾಟಕದ ಉದ್ದಾರ ಹೇಗೆ ಸಾಧ್ಯ?. ಜನರಲ್ಲಿ ಪ್ರಾದೇಶಿಕ ಭಾವನೆ ಬಲವಾಗಿ ಬೇರೂರಿದಾಗಲೇ ಆ ರಾಜ್ಯದ ಅಭಿವೃದ್ದಿ ಆಗಲು ಸಾಧ್ಯ. ನೆರೆಯ ತಮಿಳುನಾಡು, ಆಂಧ್ರದಲ್ಲಿ ಆದಂತೆ ನಮ್ಮ ರಾಜ್ಯದಲ್ಲಿ ಕೂಡಾ ಪ್ರಾದೇಶಿಕ ಮಟ್ಟದಲ್ಲಿ ಚಿಂತನೆ ನಡೆಯಬೇಕಾದ ಅಗತ್ಯವಿದೆ. ಹಾಗಾಗಿ ಬಿ.ಜೆ.ಪಿ. ಮಂದಿ ಇದೇ ಥರಾ ಮುಂದುವರಿದರೆ ಮುಂದೆ ಮತ್ತೆ ಕಾಂಗ್ರೆಸ್‌ಗೆ ಅಧಿಕಾರವನ್ನು ಬೆಳ್ಳಿತಟ್ಟೆಯಲ್ಲಿ ಇಟ್ಟು ಕೊಟ್ಟ ಹಾಗಾಗುತ್ತದೆ. ಅಲ್ಲದೆ ಸದ್ಯಕ್ಕೆ ಪ್ರಾದೇಶಿಕ ಪಕ್ಷವೆಂದೇ ಗುರುತಿಸಿಕೊಂಡಿರುವ ಜೆ.ಡಿ.ಎಸ್. ಎಂಬ ಪಕ್ಷ ಅಪ್ಪ-ಮಕ್ಕಳ ಪಕ್ಷವಾಗಿ…ಸರಿಯಾದ ಗುರಿ ಇಲ್ಲದೆ ಕೇವಲ ಸ್ವಂತ ಅಭಿವೃದ್ದಿಯನ್ನೇ ಗುರಿಯಾಗಿಸಿಕೊಂಡು ಗುರುತಿಸಿಕೊಂಡಿದೆ.

ಈ ಬಿ.ಜೆ.ಪಿ. ತನ್ನ ಕೈಯಾರೆ ತನ್ನ ಪಕ್ಷವನ್ನು ಕಿಚ್ಚಿಟ್ಟು ಸಾಯಿಸುತ್ತಿದೆ. ಮುಖ್ಯಮಂತ್ರಿಯ ಗೊತ್ತುಗುರಿಯಿಲ್ಲದ ಕೆಲವು ನಿರ್ಧಾರಗಳು, ಹೊಗೇನಕಲ್ ವಿವಾದದಲ್ಲಿ ತೋರಿಸಲಾಗದ ಕಠೋರತೆ, ಗಣಿ ಲೂಟಿಯನ್ನು ತಡೆಯಲಾಗದ ನಾಮರ್ದತೆ, ನಗರದಲ್ಲಿ ಭಯೋತ್ಪಾದನೆ ಪರ ತಮಿಳರ ಜಾಥಾಗೆ ಅವಕಾಶ ಮಾಡಿಕೊಟ್ಟು ನಗರದಲ್ಲಿ ತಮಿಳರ ಪ್ರಭಾವ ಹೆಚ್ಚುವಂತೆ ಮಾಡಿದ್ದು…ಈ ಸರಕಾರದ ನಿರ್ವೀರ್ಯತೆಯನ್ನು ತೋರಿಸುತ್ತದೆ. ಇದೇ ರೀತಿ ಕರ್ನಾಟಕದ ವಿರುದ್ದ ಈ ಮಂದಿ ಕಾರ್ಯ ಕೈಗೊಂಡರೆ ಮುಂದೊಂದು ದಿನ ಕರ್ನಾಟಕದಲ್ಲಿ ಬಿ.ಜೆ.ಪಿ. ಇತ್ತು ಎನ್ನುವುದು ಇತಿಹಾಸವಾಗಬೇಕಾಗುತ್ತದೆ.

Share SocialTwist Tell-a-Friend 

No responses yet

Mar 15 2009

ಸರಕಾರೀ ಆಸ್ಪತ್ರೆಗಳು ಎಷ್ಟು ಅಸ(ಹ್ಯ)ಹಕಾರಿ?

Published by gurumlr under Uncategorized

ನಮ್ಮ ಮಹಾ ಘನ ಸರಕಾರವು ಸರಕಾರೀ ಆಸ್ಪತ್ರೆಗಳಿಂದ ಜನ ಸಾಮಾನ್ಯರಿಗೆ ಸಹಾಯವಾಗಲೆಂದು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಆದರೆ ಎಷ್ಟರ ಮಟ್ಟಿಗೆ ಇದು ಜನಸಾಮಾನ್ಯರನ್ನು ಮುಟ್ಟಿದೆ ಎನ್ನುವುದು ಸಂದೇಹವಾಗಿದೆ. ಇದಕ್ಕೆ ಪೂರಕವೆಂಬಂತೆ ಮೊನ್ನೆ ನಾನು ಸರಕಾರೀ ಆಸ್ಪತ್ರೆಯಾದ ಹೆಸರುವಾಸಿ ’ವಿಕ್ಟೋರಿಯ ಆಸ್ಪತ್ರೆ’ ಯನ್ನು ಸಂದರ್ಶಿಸಿದೆ. ನನ್ನ ಮಗನ ಕಾಲಿನ ಚರ್ಮ ಒಡೆದು ಹೋಗಿತ್ತು, ಹೇಗೂ ಚರ್ಮ ವೈದ್ಯರೂ ಇರುತ್ತಾರೆಂದು ಒಳಗೆ ಕಾಲಿಟ್ಟಾಗಲೇ, ಒಂಥರಾ ಅಸಹ್ಯ ಅನುಭವ ಎದುರಾಯಿತು.
ಎಲ್ಲಿ ನೋಡಿದರಲ್ಲಿ ಕಸದ ರಾಶಿ, ಸ್ವಚ್ಚತೆ ಎನ್ನುವುದನ್ನು ಭೂತಕನ್ನಡಿ ಹಿಡಿದು ಹುಡುಕಬೇಕು. ಧೂಳು ತುಂಬಿರುವ ಕಡತಗಳು, ಬಂಗಲೆ ನೋಡಿದರೇನೆ ಭೂತ ಬಂಗಲೆ ಥರಾ ಅನುಭವ….

ಹೇಗೂ ಒಳನುಗ್ಗಿದ್ದಾಯಿತು ಅಂತ ರೂ.೧೦ ಕೊಟ್ಟು ಒಂದು ಚೀಟಿ ತೆಗೆದುಕೊಂಡೆ. ಮೊದಲನೇ ಮಹಡಿಯಲ್ಲಿ ಚರ್ಮವೈದ್ಯರಿದ್ದಾರೆ ಎಂದು ತಿಳಿದಾಗ, ಮಹಡಿ ಹತ್ತಿದೆ…..ಭೂತ ಬಂಗಲೆಯಾದರೂ ಸ್ವಲ್ಪ ಸ್ವಚ್ಚ ಇರುತ್ತಿತ್ತೇನೋ….ಭಯದಿಂದಲೇ ಒಳನುಗ್ಗಿದಾಗ ಇಬ್ಬರು ಕಾಲೇಜು ವಿದ್ಯಾರ್ಥಿನಿಯರು ಕೂತಿದ್ದರು…ಬಹುಶಃ ಅವರು ತರಬೇತಿಗೆಂದು ಬಂದಿರಬೇಕು. ನಾನು ನನ್ನ ಮಗನ ಕಾಲು ತೋರಿಸಿದೆ. ಅವರು ತಮ್ಮ ತಮ್ಮಲ್ಲೇ ಚರ್ಚಿಸಿ…ಸ್ವಲ್ಪ ಹೊತ್ತಾದ ಮೇಲೆ …ಇದು crack heal  ಇದಕ್ಕೆ ನೀವು ದಿನಾ ಕಾಲನ್ನು ತೊಳೆದು CRACK Cream  ಹಚ್ಚಿರಿ ಎಂದಾಗ ನನಗೆ ನಾನೆಲ್ಲಾದರೂ CRACK ಆಸ್ಪತ್ರೆಗೆ ಬಂದೆನಾ ಎಂದು ಸಂದೇಹವಾಯಿತು. ಅಲ್ಲರೀ ಇವರ ಹತ್ರ ಈ CRACK Cream  ಹಚ್ಚಿ ಅಂತ ಹೇಳಿಸಿಕೊಳ್ಳಲು ನಾನು ಬೈಕ್‌ನ ಪೆಟ್ರೋಲ್ ಸುಟ್ಟುಕೊಂಡು, ಪಾರ್ಕಿಂಗ್ ಚಾರ್ಜ್ ಕೊಟ್ಟು, ಚೀಟಿಗೆ ಹತ್ತು ರೂ. ಕೊಟ್ಟು ವಿಕ್ಟೋರಿಯಾ ಆಸ್ಪತ್ರೆಗೆ ಹೋಗಬೇಕಿತ್ತಾ?.

ಆಗಲೇ ನನಗೆ ಈ ಆಸ್ಪತ್ರೆಯ ನರಕ ಸದೃಶ ದೃಶ್ಯಗಳು ಕಾಣಸಿಕ್ಕವು. ಹೊರಗಡೆ ಎಲ್ಲೆಂದರಲ್ಲಿ ಮಲಗಿದ ರೋಗಿಗಳು, ಸ್ವಚ್ಚತೆಯಿಲ್ಲದ ಆವರಣ, ಸಿಬ್ಬಂದಿಗಳಿಲ್ಲದೆ ಖಾಲಿ ಹೊಡೆಯುತ್ತಿರುವ ಕೊಠಡಿಗಳು, ರೋಗಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಲು ಇಲ್ಲದ ಜನಗಳು….ಇಂಥಹಾ ಅಸಹ್ಯ ಆಸ್ಪತ್ರೆಗಳಲ್ಲಿ ಬಡ ರೋಗಿಗಳು ಎಷ್ಟು ಪಾಡು ಪಡುತ್ತಿರುವುದೆಂಬುದು ತಿಳಿದು ವೇದನೆಯಾಯಿತು. ಸರಕಾರೀ ವೈದ್ಯರು ತಮ್ಮ ಕಾರ್ಯ ಬಿಟ್ಟು ಖಾಸಗಿ ವ್ಯಾಪಾರ ಮಾಡುತ್ತಿರುವುದರಿಂದ ಸರಿಯಾದ ವೈದ್ಯರ ಕೊರತೆ ಇಲ್ಲಿ ಕಾಣುತ್ತಿದೆ. ಸರಕಾರವೂ ಇತ್ತ ಗಮನ ಕೊಡದಿರುವುದು ಅದರ ಕಾರ್ಯ ದಕ್ಷತೆಯನ್ನು ಪ್ರಶ್ನಾರ್ಹವಾಗಿಸಿದೆ.
ನನಗನಿಸಿದ ಮಟ್ಟಿಗೆ ಎಲ್ಲಾ ಸರಕಾರೀ ಆಸ್ಪತ್ರೆಗಳ ಹಣೆಬರಹ ಇಷ್ಟೇ ಎಂದು ಕಾಣುತ್ತದೆ. ಸರಕಾರ ಯಾಕೆ ಇತ್ತ ಗಮನ ಕೊಡುತ್ತಿಲ್ಲ?. ಚರ್ಚು, ಮಸೀದಿ, ದೇವಳ ನಿರ್ಮಾಣಕ್ಕೆ ಕೋಟಿ, ಕೋಟಿ ಸುರಿಯುವ ಈ ಸರಕಾರಗಳು ಜನರಿಗೆ ಅತೀ ಅಗತ್ಯವಾದ ವೈದ್ಯಕೀಯ ನೆರವು, ಉತ್ತಮ ಶಿಕ್ಷಣಕ್ಕೆ ಯಾಕೆ ಹಣ ಖರ್ಚು ಮಾಡುತ್ತಿಲ್ಲ?…….

ಇದು ಒಂದು ಕೋಟಿ ಡಲರ್ ಪ್ರಶ್ನೆ….ಯಾರಾದರೂ ಉತ್ತರಿಸುವುರಾ?

Share SocialTwist Tell-a-Friend 

One response so far

Mar 08 2009

ತಮಿಳು ಸಂಘಟನೆಗಳ ದೇಶವಿರೋಧಿ ಜಾಥಾ

Published by gurumlr under Uncategorized

ಬೆಂಗಳೂರು ಮಾರ್ಚ್ ೮: ಇತ್ತೀಚೆಗೆ ಬೆಂಗಳೂರಿನಲ್ಲಿ ತಮಿಳು ಸಂಘಟನೆಗಳು ಒಂದು ಬೃ‍ಹತ್ ಜಾಥಾ ಏರ್ಪಡಿಸಿದ್ದವು. ಇಲ್ಲಿ ವಿಷಯ ಜಾಥಾ ನಡೆಸಿದ ಬಗ್ಗೆ ಅಲ್ಲ, ಅವರು ಜಾಥಾಗೆ ಬಳಸಿದ ವಿಷಯದ ಬಗ್ಗೆ. ಅಂದರೆ ಬೆಂಗಳೂರಿನ ಸಕಲ ತಮಿಳು ಸಂಘಟನೆಗಳು ಉಗ್ರಗಾಮಿಗಳ, ಭಯೋತ್ಪಾದಕರ ಪರ ಬೆಂಬಲ ಸೂಚಿಸಿ ಈ ಜಾಥಾ ಏರ್ಪಡಿಸಿದ್ದವು.

ಅಂದರೆ ತಮಿಳರಿಗೆ ಈ ದೇಶದ ಸಂವಿಧಾನದ ಮೇಲೆ ಇರುವ ನಂಬಿಕೆಯೇ ಪ್ರಶ್ನಾರ್ಹವಾಗಿದೆ. ಇದು ಈಗಿನಿಂದಲ್ಲ, ನಮ್ಮ ದೇಶ ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡನೆಯಾದಾಗಲೇ ಪ್ರತ್ಯೇಕತೆಯ ವಿಷಬೀಜವನ್ನು ತಮಿಳುನಾಡಿನ ನಾಯಕರುಗಳು ಆ ಜನರ ಮನದಲ್ಲಿ ಬಿತ್ತಿದ್ದರು.ಆಗ ಅದನ್ನು ಅಂದಿನ ಕಾಂಗ್ರೆಸ್ ಸರಕಾರ ಸಮರ್ಥವಾಗಿ ನಿಭಾಯಿಸಿ ತಮಿಳರಿಗೆ ತಿಳಿಹೇಳಲಾಗಿತ್ತು. ಆದರೆ ಈಗ ಅದೇ ತಪ್ಪನ್ನು ತಮಿಳುನಾಡಿನ ರಾಜಕಾರಣಿಗಳಾದ ವೈಕೋ, ಕರುಣಾನಿಧಿ, ಜಯಲಲಿತಾ ಮೊದಲಾದ ಪಾಖಂಡಿ ರಾಜಕಾರಣಿಗಳು ಮತ್ತೆ ಆ ವಿಷ ಬೀಜವನ್ನು ತಮಿಳರ ಮನದಲ್ಲಿ ಬಿತ್ತಲು ಶುರು ಮಾಡಿದ್ದಾರೆ.

ಆದರೆ ಬೆಂಗಳೂರಿನಲ್ಲಿ ನಡೆದ ಭಯೋತ್ಪಾದಕರ ಪರ ಜಾಥಾಗೆ ಪರೋಕ್ಷ ಬೆಂಬಲ ನೀಡಿದ ಬಿ.ಜೆ.ಪಿ. ಸರಕಾರ, ಮೌನವಾಗಿದ್ದ ಕಾಂಗ್ರೆಸ್, ಜೆ.ಡಿ.ಎಸ್ ಮೊದಲಾದ ರಾಜಕೀಯ ಪಕ್ಷಗಳ ಮೇಲೆ ಅನುಮಾನ ಶುರುವಾಗಿದೆ. ಮೊದಲಿನಿಂದಲೂ ಮುಸಲ್ಮಾನರನ್ನು ಓಲೈಸಿ ಅದರ ಫಲವನ್ನು ಇಂದು ಭಯೋತ್ಪಾದಕತೆಯ ರೂಪದಲ್ಲಿ ಅನುಭವಿಸುತ್ತಿರುವ ಭಾರತ, ಈಗ ಈ ತಮಿಳರ ನಡೆಯಿಂದ ಮತ್ತೊಂದು ಭಯೋತ್ಪಾದಕತೆಯನ್ನು ಎದುರು ನೋಡಲಿದೆಯೇ?. ಅಂದರೆ LTTE  ಎಂಬ ಭಯೋತ್ಪಾದಕ, ಉಗ್ರಗಾಮಿ ಸಂಘಟನೆಗಳಿಗೆ ಬಹಿರಂಗವಾಗಿ ಬೆಂಬಲ ನೀಡಿದ ಈ ಸಂಘಟನೆಗಳ ವಿರುದ್ಧ ಸರಕಾರ ಯಾಕೆ ಕಣ್ಣು ಮುಚ್ಚಿ ಕುಳಿತಿದೆ?. ನಮ್ಮ ಭಾರತದ ವಿರುದ್ಧ ಭಯೋತ್ಪಾದಕತೆಯನ್ನು ಮಾಡುತ್ತಿರುವ ಉಗ್ರಗಾಮಿ ಸಂಘಟನೆಗಳಿಗೆ ಪಾಕಿಸ್ತಾನದಲ್ಲಿ ಕೂಡ ಬೆಂಬಲ ಸಿಗುವುದಿಲ್ಲ. ಅಂದರೆ ಅಲ್ಲಿನ ನಾಗರಿಕರು ಇದರ ವಿರುದ್ಧ ದನಿಯೆತ್ತುತ್ತಿದ್ದಾರೆ. ಆದರೆ ಅದಕ್ಕೆ ವಿರುದ್ದವಾಗಿ ಈ ತಮಿಳರು ಪಾಕಿಸ್ತಾನೀಯರಿಗಿಂತ ಕನಿಷ್ಠವಾಗಿ ವರ್ತಿಸುತ್ತಿರುವುದು ಅವರಿಗೆ ಈ ದೇಶದ ಸಂವಿಧಾನದ ಮೇಲೆ ಇರುವ ನಂಬಿಕೆಯನ್ನು ಪ್ರಶ್ನಾರ್ಹವಾಗಿಸಿದೆ. ಈ ತಮಿಳು ಸಂಘಟನೆಗಳು ಯಾವತ್ತಿದ್ದರೂ ಕರ್ನಾಟಕಕ್ಕೆ ಅಪಾಯಕಾರಿ ಹಾಗೂ ಭಾರತಕ್ಕೂ ಅಪಾಯಕಾರಿ. ಇತ್ತ ರಾಜ್ಯ ಸರಕಾರ ಭಯೋತ್ಪಾದನಾ ವಿರೋಧಿ ಆಂದೋಲನ ನಡೆಸುತ್ತಿದ್ದರೆ ಇತ್ತ ತಮಿಳರು ಭಯೋತ್ಪಾದಕರ ಪರ ಜಾಥಾ ಆಯೋಜಿಸಿದ್ದರು. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಈಗ ತೆಪ್ಪಗಿರುವ ರಾಜ್ಯ ಸರಕಾರ ಮುಂದೆ ಕರ್ನಾಟಕವನ್ನೂ ಮತ್ತೊಂದು ಶ್ರೀಲಂಕಾ ಆಗುವುದನ್ನು ತಪ್ಪಿಸಲು ಸಾಧ್ಯವಿರಲಾರದು.

ಅಷ್ಟಕ್ಕೂ LTTE ಎಂಬ ಭಯೋತ್ಪಾದಕ ಸಂಘಟನೆ ಶ್ರೀಲಂಕಾ ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಿ, ಅಲ್ಲಿನ ಜನರ ಹಕ್ಕನ್ನು ಕಸಿದುಕೊಳ್ಳುತ್ತಿರುವುದು ಯಾವ ನ್ಯಾಯ?. ಈ ತಮಿಳರಿಗೆ ಅಲ್ಲಿ ಪ್ರತ್ಯೇಕ ರಾಷ್ಟ್ರ ಕೇಳಲು ಯಾವ ಹಕ್ಕಿದೆ?. ಶ್ರೀಲಂಕಾ ಸರಕಾರ ಒಂದು ಉತ್ತಮ ಕ್ರಮವನ್ನೇ ತೆಗೆದುಕೊಂಡಿದೆ.

ಕೂಡಲೇ ಪೋಲಿಸ್ ಇಲಾಖೆ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡು ಈ ಸಂಘಟನೆಗಳ ಮೇಲೆ ಹದ್ದಿನ ಕಣ್ಣಿಟ್ಟಿರುವುದು ಸೂಕ್ತ. ಇಲ್ಲದಿದ್ದಲ್ಲಿ ಈಗ ಶ್ರೀಲಂಕಾದಲ್ಲಿ ಆಗುತ್ತಿರುವುದು ಮುಂದೆ ಕರ್ನಾಟಕದಲ್ಲಿ, ಇಡೀ ರಾಷ್ಟ್ರದಲ್ಲಿ ಆಗಬಹುದು.

Share SocialTwist Tell-a-Friend 

No responses yet

Mar 01 2009

ಸತ್ಯ ಹೇಳಿದ್ದಕ್ಕೆ ಶಿಕ್ಷೆ…ಇದು ಕಾಂಗ್ರೆಸ್ ಸಂಸ್ಕೃತಿ

Published by gurumlr under Uncategorized

<strong>ಬೆಂಗಳೂರು ದಿನಾಂಕ ೦೧-೦೩-೨೦೦೯:</strong> ಮಂಗಳೂರಿನ ಪಬ್ ಧಾಳಿಯ ತನಿಖೆಯ ನೇತೃತ್ವ ವಹಿಸಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾದ ಶ್ರೀಮತಿ ನಿರ್ಮಲಾ ವೆಂಕಟೇಶ್ ಅವರನ್ನು ಸತ್ಯ ಹೇಳಿದ್ದಕ್ಕಾಗಿ ಸದಸ್ಯ ಸ್ಥಾನದಿಂದ ಕಿತ್ತೊಗೆಯಲಾಗಿದೆ. ಇಷ್ಟಾದರೂ ಅವರು ತಮ್ಮ ತನಿಖಾ ವರದಿಯಲ್ಲಿ ಹೇಳಿದ್ದಾದರೂ ಏನು?. “ಪಬ್‍ನಲ್ಲಿ ಸೂಕ್ತ ಭದ್ರತೆ ಇರಲಿಲ್ಲ ಹಾಗೂ ಪಬ್ ನಡೆಸಲು ಸೂಕ್ತ ಅನುಮತಿ ಪತ್ರ ಇರಲಿಲ್ಲ ” ಎನ್ನುವುದು.
ಅದು ಈಗಾಗಲೇ ಎಲ್ಲರಿಗೂ ಬಹಿರಂಗವಾಗಿ ತಿಳಿದಿದ್ದರೂ, ರೇಣುಕಾ ಚೌಧರಿ ಎಂಬ ಭ್ರಷ್ಟ ಮಹಿಳೆ ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಶ್ರೀಮತಿ ನಿರ್ಮಲಾ ಅವರನ್ನು ಕಿತ್ತೊಗೆದಿದ್ದಾಳೆ. ಅವಳು ತನ್ನ ಸ್ಥಾನದ ದುರುಪಯೋಗ ಪಡಿಸಿಕೊಂಡು ಅಧಿಕಾರದ ಅಮಲಿನಿಂದ ನಿರ್ಮಲಾ ಅವರ ವಿರುದ್ದ ಸೇಡು ತೀರಿಸಿಕೊಂಡಿದ್ದಾಳೆ.ಇವರಂಥಹ ಜನರ ಮನಸ್ಸು ಯಾವ ರೀತಿ ಇರುತ್ತದೆ ಎಂದರೆ, ತಾನೂ ಹಾಳಾಗಿರುವುದಲ್ಲದೆ-ಜಗತ್ತನ್ನೂ ಹಾಳು ಮಾಡಬೇಕು ಎನ್ನುವುದು. ಅದೂ ಅಲ್ಲದೆ ಮಂಗಳೂರಿನಲ್ಲಿ ನಡೆದ ಒಂದು ಸಣ್ಣ ಘಟನೆಯನ್ನೇ ನೆಪ ಮಾಡಿಕೊಂಡು ಕಾಂಗ್ರೆಸ್‍ನ ಎಲ್ಲ ನಾಯಕರೂ ಬಿ.ಜೆ.ಪಿ.ಯನ್ನು ತುಳಿಯಲು ಒಂದು ಅಸ್ತ್ರ ಸಿಕ್ಕಿತು ಎಂದು ಕೂಗಾಡಿದ್ದೇ ಕೂಗಾಡಿದ್ದು.
ಆದರೆ ಈ ಚೌಧರಿ ಎನ್ನುವ ಮಹಿಳೆ ಇನ್ನೂ ಸ್ವಲ್ಪ ಮುಂದೆ ಹೋಗಿ- ಮಂಗಳೂರಿಗರನ್ನು ತಾಲಿಬಾನಿಗರೆಂದು ಕರೆದು ತನ್ನ ದೇಶಕ್ಕೇ ಅವಮಾನ ಮಾಡಿದ್ದಾಳೆ. ಅಂದರೆ ಯಾವುದೇ ಸುಸಂಸ್ಕೃತ ಹಾಗೂ ಸಭ್ಯ ಮನೆತನದ ಮಹಿಳೆಯೂ ಪಬ್‍ಗೆ ಹೋಗಿ ಕುಡಿಯುವ ಅಭ್ಯಾಸ ನಮ್ಮ ದೇಶದಲ್ಲಿ ರೂಢಿಸಿಕೊಂಡಿಲ್ಲ. ಪಬ್‍ಗೆ ಹೋದರೆ, ಅದೂ ಪರ ಪುರುಷನ ಜೊತೆ ಹೋದರೆ ಆ ಮಹಿಳೆಯ ಸಂಸ್ಕೃತಿ ಪ್ರಶ್ನಾರ್ಹವಾದದ್ದೇ. ಈ ರೇಣುಕಾ ಚೌಧರಿಯಂತಹ ಮಹಿಳೆಯರು ಹಿಂದೆ ಮುಂದೆ ನೋಡದೆ ಎಲ್ಲರೂ ತಮ್ಮಂತೇ ಇರುತ್ತಾರೆಂದು ತಾವೇ ನಿರ್ಧರಿಸಿ ಬಾಯಿಗೆ ಬಂದಂತೆ ಮಾತಾಡುತ್ತಾರೆ.

Share SocialTwist Tell-a-Friend 

No responses yet

Feb 22 2009

ಬೆಂಗಳೂರಿನಲ್ಲಿ ಹಗಲು ದರೋಡೆಕೋರರ ಹೆಚ್ಚಳ

Published by gurumlr under Uncategorized

ಬೆಂಗಳೂರಿನಲ್ಲಿ ಈಗ ದ್ವಿಚಕ್ರ ಸವಾರರು ಹಾಗೂ ಲಗ್ಗೇಜ್ ತುಂಬಿದ ಆಟೊ, ಲಾರಿಗಳು ಓಡಾಡುವುದು ತ್ರಾಸದಾಯಕವಾಗಿದೆ. ಏಕೆಂದರೆ ಬೆಂಗಳೂರಿನ ರಸ್ತೆಗಳಲ್ಲಿ ಮೈಲಿಗೋದರಂತೆ ಅಡ್ಡಗಟ್ಟುವ ಸರಕಾರೀ ದರೋಡೆಕೋರರು (ಕಳ್ಳ ಕಾಕರು) ಜಾಸ್ತಿಯಾಗಿದ್ದಾರೆ.

ಅಂದರೆ ಎಲ್ಲಿಯಾದರೂ ಸ್ವಲ್ಪ ಸಂದೇಹದಿಂದ ಗಾಡಿ ಓಡಿಸಿದಿರೋ…ನಿಮ್ಮ ದ್ವಿಚಕ್ರ ವಾಹನವನ್ನು ಆಡ್ಡ ಹಾಕಿ ಯಾವುದೇ ದಾಖಲೆಗಳಿದ್ದರೂ ಸಹ ಯಾವುದೋ ಕುಂಟುನೆಪ ತೆಗೆದು ಜೇಬಿನಲ್ಲಿರುವುದನ್ನೆಲ್ಲಾ ದೋಚುವ ಈ ಮಂದಿಯ ಬಗ್ಗೆ ಎಲ್ಲರೂ ಜಾಗರೂಕರಾಗಿರುವುದು ಒಳಿತು. ಹಾಗಂತ ಇವರ ಕೈಯಿಂದ ಪಾರಾಗಲು ಸಾಧ್ಯವೇ ಇಲ್ಲ. ಏಕೆಂದರೆ ರಕ್ತ ಹೀರುವ ಜಿಗಣೆಗಳಂತೆ ಹಣದ ರುಚಿ ಹತ್ತಿರುವ ಈ ಖದೀಮರು ದಿನಕ್ಕೆ ಏನಿಲ್ಲವೆಂದರೂ ಐದು ಸಾವಿರದವರೆಗೂ ದೋಚುತ್ತಿದ್ದಾರೆ. ಹಾಗಂತ ಇವರ ಗುಂಪಿನಲ್ಲಿ ಸಾಚಾಗಳು ತುಂಬಾ ಕಡಿಮೆ. ಬೆಂಗಳೂರಿನ ಗಬ್ಬು ರಸ್ತೆಗಳು, ಹದಗೆಟ್ಟ ಟ್ರಾಫಿಕ್ ವ್ಯವಸ್ಥೆಯನ್ನು ಮೊದಲು ಸರಿ ಮಾಡಿ ನಂತರ ಈ ಕೆಲಸ ಮಾಡುವುದೊಳಿತು. ಎಕೆಂದರೆ Signal ಕೇರ್ ಮಾಡದೆ ಗಾಡಿ ಓಡಿಸುವವರು, wheeling ಮಾಡುವವರು, ಭರೋ….ಎಂದು ಜೋರಾಗಿ ಗಾಡಿ ಓಡಿಸುವ ಕೆಲ ಕಾಲೇಜು ವಿದ್ಯಾರ್ಥಿಗಳು…ಮೊದಲು ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅದು ಬಿಟ್ಟು ಎಲ್ಲರನ್ನೂ ರಕ್ತ ಹೀರಿದಂತೆ ಹಣಕ್ಕಾಗಿ ಪೀಡಿಸುವುದು ಯಾವ ನ್ಯಾಯ?. ಮಾಡಿದರೆ ಎಲ್ಲವೂ ಸರಿ ಇರಬೇಕು.

ಇದರ ಬಗೆ ಕ್ರಮ ತೆಗೆದುಕೊಳ್ಳುವವರು ಯಾರು?.

Share SocialTwist Tell-a-Friend 

No responses yet

Feb 13 2009

’ವ್ಯಾ’ಲೆಂಟೈನ್ಸ್ ಡೇ ಪ್ರತಿಭಟನೆ ಹಿಂದೆ ರಾಜಕೀಯ ಪಿತೂರಿ

Published by gurumlr under Save India

ನಾಳೆ ಅಂದರೆ ಫೆಬ್ರವರಿ ಹದಿನಾಲ್ಕನೇ ತಾರೀಖು ಎಲ್ಲರೂ ಕಾತರದಿಂದ ನೋಡುತ್ತಿರುವ “ವ್ಯಾಕ್” ಲಾಂಟೈನ್ ಡೇ ಬಂದೇ ಬಿಟ್ಟಿದೆ. ಆದರೆ ಕೆಲ ರಾಜಕೀಯ ಪಕ್ಷಗಳು ಹಾಗೂ ಕೆಲ ಕೋಮುವಾದಿ (ಪ್ರಗತಿಪರ ಸಂಘಟನೆಗಳೆಂದು ಹಣೆಪಟ್ಟಿ ಕಟ್ಟಿಕೊಂಡಿರುವ) ಸಂಘಟನೆಗಳು ಇದರ ಪರವಾಗಿ ಭಾರೀ ಬೆಂಬಲ ನೀಡುವ ಪ್ರತಿಭಟನೆಯನ್ನು :) ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ.

ಕಾಂಗ್ರೆಸ್ ಮತ್ತು ರಾಜಕೀಯ ಪಿತೂರಿ

ಇಲ್ಲಿ ನಾವು ಪ್ರಮುಖವಾಗಿ, ಪಾರದರ್ಶಕವಾಗಿ ನೋಡಬೇಕಾದ ಒಂದು ಅಂಶವೆಂದರೆ, ಕೆಲ ರಾಜಕೀಯ ಪಕ್ಷಗಳು, ಪ್ರಮುಖವಾಗಿ ಕಾಂಗ್ರೆಸ್ ಕೇವಲ ಬಿ.ಜೆ.ಪಿ.ಯನ್ನು ಅಧಿಕಾರದಿಂದ ಕೆಳಗಿಳಿಸಿ ತಾನು ಹಿಂಬಾಗಿಲ ಮೂಲಕ ಅಧಿಕಾರದ ಗದ್ದುಗೆ ಹಿಡಿಯುವ ಒಂದು ಸಂಚನ್ನು ರೂಪಿಸಿದೆ. ನಾನೇನೂ ಭಾರತೀಯ ಜನತಾ ಪಕ್ಷದ ಬೆಂಬಲಿಗನಲ್ಲ. ಕರ್ನಾಟಕವನ್ನು ಲೂಟಿ ಮಾಡುತ್ತಿರುವ ರೆಡ್ಡಿ (ರೌಡಿ) ಸಹೋದರರು ಹಾಗೂ ಶ್ರೀರಾಮುಲು ಎಂಬ ಖೂಳ, ಕನ್ನಡವಿರೋಧಿಗಳು ಕರ್ನಾಟಕವನ್ನು ತಮ್ಮ ಕಪಿ ಮುಷ್ಟಿಯಲ್ಲಿ ಇಟ್ಟುಕೊಂಡಿರುವವರೆಗೆ ಕರ್ನಾಟಕದ ಉದ್ದಾರ ಸಾಧ್ಯವಿಲ್ಲ. ಆದರೆ ಬಿ.ಜೆ.ಪಿ. ಸರಕಾರ ಕೆಲವು ಉತ್ತಮ ಕೆಲಸ ಮಾಡುವುದಕ್ಕೆ ಕಾಂಗ್ರೆಸ್ ತನ್ನ ಪಾಖಂಡಿತನ ಪ್ರದರ್ಶಿಸಿ ತನ್ನ ಅಲ್ಪತನವನ್ನು ಜಗಜ್ಜಾಹೀರುಗೊಳಿಸಿದೆ. ರಾಜ್ಯದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ವಿರೋಧಿ ಆಂದೋಲನದ ವಿರುದ್ಧ ಕಾಂಗ್ರೆಸ್ ಹಿಂಸಾತ್ಮಕ ಪ್ರತಿಭಟನೆ ಮಾಡುತ್ತಿರುವುದು ಆ ಪಕ್ಷಕ್ಕೆ ದೇಶದ ಬಗ್ಗೆ ಇರುವ ಕಾಳಜಿ ಹಾಗೂ ಭಯೋತ್ಪಾದಕರ ಪರವಾದ ನಿಲುವನ್ನು ತೋರಿಸುತ್ತದೆ. ಭಯೋತ್ಪಾದಕರು ಕೇವಲ ಮುಸಲ್ಮಾನರೆಂಬ ಒಂದೇ ಕಾರಣಕ್ಕೆ ಅವರನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್ ಪಕ್ಷ ಹಿಂದೂಗಳ, ಈ ರಾಷ್ಟ್ರದ ಬಗ್ಗೆ ತಿರಸ್ಕಾರದ ಭಾವನೆ ಹೊಂದಿರುವುದು ಇದರಿಂದ ಮನದಟ್ಟಾಗುತ್ತದೆ. ಅಲ್ಲದೆ ಮಂಗಳೂರಿನಲ್ಲಿ ನಡೆದ ಪಬ್ ದಾಳಿ, ಶೃತಿ ಮೇಲಿನ ಹಲ್ಲೆ (ಸಿ.ಪಿ.ಐ. ಕಾರ್ಯಕರ್ತರಿಂದ), ಒಬ್ಬ ಮುಸಲ್ಮಾನನಿಂದ ಅತ್ಯಾಚಾರಕ್ಕೊಳಗಾದ ಬಾಲಕಿಯನ್ನು ಅಯ್ಯಪ್ಪ ಭಕ್ತರು ರಕ್ಷಿಸಿ ಪೋಲಿಸರಿಗೆ ಒಪ್ಪಿಸಿದ ಘಟನೆಯನ್ನು ಬಿ.ಜೆ.ಪಿ.ಯ ತಲೆಗೆ ಕಟ್ಟುವ ಕಾಂಗ್ರೆಸ್‍ನ ನಿರ್ಧಾರ ಅದರ ರಾಜ್ಯದ್ರೋಹಿತನಕ್ಕೆ ಸಾಕ್ಷಿ. ಇಂತಹ ಘಟನೆಗಳನ್ನು ರಾಜಕೀಯಗೊಳಿಸಿ ಹೇಗಾದರೂ ಮಾಡಿ ಸರಕಾರವನ್ನು ಉರುಳಿಸಿ ಹಿಂಬಾಗಿಲಿನಿಂದ ಅಧಿಕಾರ ಪಡೆಯಬೇಕೆಂಬ ಹಂಬಲ ಈ ಕಾಂಗ್ರೆಸ್‍ಗೆ. ಇದು ಕರ್ನಾಟಕದ ಜನತೆಗೆ ಕಾಂಗ್ರೆಸ್ ಮಾಡುತ್ತಿರುವ ದ್ರೋಹ. ಜನರಿಂದ ಆಯ್ಕೆಗೊಳಗಾದ ಒಂದು ಸರಕಾರವನ್ನು ತನ್ನ ತಿಪ್ಪೆ ಪ್ರತಿಭಟನೆಯಿಂದ ಉರುಳಿಸುವ ಹುನ್ನಾರ ಖಂಡನೀಯ. ಅಧಿಕಾರಕ್ಕೆ ಬಂದ ಕೂಡಲೇ ಮ್ಯಾಜಿಕ್ ಆಗಲು ಸಾಧ್ಯವಿಲ್ಲ. ಮುಂದಿನ ಐದು ವರ್ಷಗಳಲ್ಲಿ ಈ ಬಿ.ಜೆ.ಪಿ. ಸರಕಾರದ ಸಾಧನೆ ನೋಡಿ ಮತದಾರ ಮತ್ತೆ ತೀರ್ಪು ನೀಡುತ್ತಾನೆ. ಅದನ್ನು ಬದಲಿಸಲು ಈ ಕಾಂಗ್ರೆಸ್‍ಗೆ ಏನು ಹಕ್ಕಿದೆ?.

ಪ್ರಗತಿಪರ ಸಂಘಟನೆಗಳು ಮತ್ತು ಸಂಸ್ಕೃತಿ

ವ್ಯಾಲೆಂಟೈನ್ಸ್ ಡೇ ಯಾಕಾಗಿ ಆಚರಿಸುತ್ತಾರೆ?, ಅದು ಎಲ್ಲಿ ಹುಟ್ಟಿತು, ಅದರ ನಿಜವಾದ ಮಹತ್ವವೇನು ಎಂಬುದನ್ನು ಅರಿಯದೆ, ಕೇವಲ ಕಾಮ ತೀಟೆ ಪೂರೈಸಿಕೊಳ್ಳಲು ಒಂದು ದಿನವನ್ನು ಮೀಸಲಾಗಿಟ್ಟಿರುವುದು ನಮ್ಮ ದೇಶದ ದೊಡ್ಡ ದುರಂತ. ಶ್ರೀರಾಮ ಸೇನೆಯ ದಾಳಿಯನ್ನು ನಾನು ಖಂಡಿಸಿದರೂ, ಆ ದಾಳಿಯ ಹಿಂದಿನ ಉದ್ದೇಶಕ್ಕೆ ಬೆಂಬಲ ನೀಡುತ್ತೇನೆ. ಕೆಲ ಪ್ರಗತಿಪರ ಸಂಘಟನೆಗಳೆಂದು ತಮ್ಮನ್ನು ತಾವೇ ಕರೆದುಕೊಂಡಿರುವ ಕೆಲ ಸಂಘಟನೆಗಳು ಈ ವ್ಯಾಲೆಂಟೈನ್ಸ್ ಡೇಯನ್ನು ಬೆಂಬಲಿಸಿ ಬಹಿರಂಗವಾಗಿ ಕಾಮ ಪ್ರಚೋದನೆಗೆ ಬೆಂಬಲ ನೀಡಿವೆ. ಅಲ್ಲದೆ ಇದೇ ಕಾರಣಕ್ಕಾಗಿ ಶ್ರೀರಾಮ ಸೇನೆಗೆ ಪೆಬ್ರವರಿ ೧೪ರ ದಿನದಂದು ಕಾಂಗ್ರೆಸ್ ಮತ್ತು ಈ ಪ್ರಗತಿಪರ ಸಂಘಟನೆಗಳು ಶ್ರೀರಾಮ ಸೇನೆಯ ಹೆಸರಿನಲ್ಲಿ ದಾಂಧಲೆ, ಅತ್ಯಾಚಾರ ಮಾಡಿ ರಾಜ್ಯದ ಬಿ.ಜೆ.ಪಿ. ಸರಕಾರದ ಮೇಲೆ ಗೂಬೆ ಕೂರಿಸುವ ಕಾರ್ಯಕ್ರಮದ ವಾಸನೆ ಬಡಿದ ಕೂಡಲೇ, ತನ್ನ ಪ್ರತಿಭಟನೆಯನ್ನು ಸಾಂಕೇತಿಕವಾಗಿ ಆಚರಿಸುವ ನಿರ್ಧಾರ ಕೈಗೊಂಡು ಉತ್ತಮ ಕೆಲಸ ಮಾಡಿದೆ.

ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ವ್ಯಾಲೆಂಟೈನ್ಸ್ ಡೇ

ವ್ಯಾಲೆಂಟೈನ್ಸ್ ಡೇ ನೆಪದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ವ್ಯಾಪಾರವನ್ನು ಜಬರ್ದಸ್ತಾಗಿ ಮಾಡಿ, ಭಾರತೀಯರಿಂದ ಹಣವನ್ನು ಕಸಿದು ಅವರನ್ನು ಮೂರ್ಖರನ್ನಾಗಿಸುವ ಹುನ್ನಾರ ನಮ್ಮ ಈ ಅಧಮರಿಗೆ ಹೇಗೆ ಅರ್ಥವಾಗಬೇಕು?. ಕೇವಲ ಬಿ.ಜೆ.ಪಿ. ಬೆಂಬಲಿತ ಸಂಘಟನೆಯೊಂದು ಅದರ ವಿರುದ್ಧ ಆಂದೋಲನ ನಡೆಸುತ್ತಿರುವ ಒಂದೇ ಕಾರಣಕ್ಕಾಗಿ ಅದಕ್ಕೆ ಬೆಂಬಲ ಸೂಚಿಸುವ ಸಂಸ್ಕೃತಿ ಲಂಪಟರ ಕೈಯಿಂದ ನಮ್ಮ ದೇಶವನ್ನು ರಕ್ಷಿಸಬೇಕಾಗಿದೆ. ಪ್ರಗತಿಪರರೆಂದು ಕರೆದುಕೊಳ್ಳುವ ಕೆಲವು ಪುಡಿ ರೌಡಿಗಳು, ಸಮಾಜದ್ರೋಹಿಗಳು ಈ ದಿನದ ಸದುಪಯೋಗ(ದುರುಪಯೋಗ) ಪಡೆದುಕೊಂಡು, ದಾಂಧಲೆ, ಹಲ್ಲೆ, ಅತ್ಯಾಚಾರ ನೆಡೆಸಿ ಅದನ್ನು ಸರಕಾರದ ತಲೆಗೆ ಕಟ್ಟಿ, ಸರಕಾರ ಉರುಳಿಸಿ, ಕಾಂಗ್ರೆಸ್‍ಗೆ ಬೆಂಬಲ ನೀಡುವ ಹುನ್ನಾರ ಖಂಡನೀಯ. ಇದಕ್ಕೆ ಬಹುರಾಷ್ಟ್ರೀಯ ಕಂಪೆನಿಗಳ ಬೆಂಬಲವೂ ಇರುವುದು ಆತಂಕದ ವಿಷಯ. ಅಲ್ಲದೆ ಇದನ್ನು ಅರ್ಥಮಾಡಿಕೊಳ್ಳದಿರುವ ನಮ್ಮ ಭಾವೀ ಪ್ರಜೆಗಳು ತಿಪ್ಪೆ ರಾಜಕೀಯದ ಬಲೆಗೆ ಬಿದ್ದು, ತಮ್ಮ ಶೀಲ ಕಳೆದುಕೊಂಡಾದರೂ ಸರಿ ವ್ಯಾಲೆಂಟೈನ್ಸ್ ಡೇ ಆಚರಿಸುವುದಾಗಿ ಬಹಿರಂಗವಾಗಿ “Pub Bharo, Hug Karo” ಎಂಬ ಅಭಿಯಾನ ಆರಂಭಿಸಿರುವುದು ಅವರ ನೀಚತನವನ್ನು ತೋರಿಸುತ್ತದೆ. ಈ ರಾಜಕೀಯ ಬಲೆಯಿಂದ ಅವರು ಹೊರಬಂದು ತಮ್ಮ ಆತ್ಮ ಸಾಕ್ಷಿಯಂತೆ ನಡೆದುಕೊಂಡರೆ ಎಲ್ಲರಿಗೂ ಕ್ಷೇಮ.

Share SocialTwist Tell-a-Friend 

No responses yet

Next »

youtube download
Powered By Indic IME